Site icon Compitative Exams MCQ Questions and Answers

Indian constitution top 50 important questions in Kannada.

Contents show
1 ಮುಂಬರಲಿರುವ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಭಾರತ ಸಂವಿಧಾನದ ಪ್ರಮುಖ ಪ್ರಶ್ನೋತ್ತರಗಳು :

ಮುಂಬರಲಿರುವ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಭಾರತ ಸಂವಿಧಾನದ ಪ್ರಮುಖ ಪ್ರಶ್ನೋತ್ತರಗಳು :

1. ಸಂವಿಧಾನದ 93ನೇ ತಿದ್ದುಪಡಿ ಯಾವ ವಿಷಯಕ್ಕೆ ಸಂಬಂಧಿಸಿದೆ ?
ಉಚಿತ ಮತ್ತು ಕಡ್ಡಾಯ ಶಿಕ್ಷಣದ ಹಕ್ಕು.

2. ಮೂಲಭೂತ ಹಕ್ಕುಗಳನ್ನು ಯಾವ ಸಂದರ್ಭದಲ್ಲಿ ಸ್ಥಗಿತಗೊಳಿಸಬಹುದು ?
ರಾಷ್ಟ್ರೀಯ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ.

3. ಮೂಲಭೂತ ಹಕ್ಕುಗಳನ್ನು ಎಷ್ಟು ಗುಂಪುಗಳಾಗಿ ವಿಭಜಿಸಬಹುದು ?
6 ಗುಂಪುಗಳು.

4. ಹೇಬಿಯಸ್ ಕಾರ್ಪಸ್ ಎಂದರೇನು ?
ವ್ಯಕ್ತಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲು ನ್ಯಾಯಾಲಯಕೊಟ್ಟ ಅಜ್ಞಾತ ಪತ್ರ.

5. ತನ್ನ ಮೂಲಭೂತ ಹಕ್ಕುಗಳು ಉಲ್ಲಂಘನೆ ಆದರೆ ಪ್ರಜೆಯೊಬ್ಬ ಸುಪ್ರೀಂಕೋರ್ಟಿಗೆ ಯಾವ ವಿಧಿಯ ಪ್ರಕಾರ ರಿಟ್ ಅರ್ಜಿ ಸಲ್ಲಿಸಬಹುದು ?
ಸಂವಿಧಾನದ 32ನೇ ವಿಧಿ.

6. ಭಾರತ ಸಂವಿಧಾನದ ಮೂಲಭೂತ ಹಕ್ಕುಗಳು….
ಜಾರಿ ಮಾಡಲಾಗುವಂತವು.

7. ನ್ಯಾಯಾಂಗದ ಪರಿಭಾಷೆಯಲ್ಲಿ ಹೇಬಿಯಸ್ ಕಾರ್ಪಸ್ ಎನ್ನುವುದು ಒಂದು ಏನು ?
ರಿಟ್ ಆಗಿದೆ.

8. ಆರೋಪಿಯೊಬ್ಬನಿಗೆ ಈಗಾಗಲೇ ಅದೇ ಅಪರಾಧಕ್ಕಾಗಿ ಶಿಕ್ಷೆಯನ್ನು ನೀಡಲಾಗಿದ್ದರೆ , ಅಂತಹ ಆರೋಪಿಯನ್ನು ವಿಚಾರಣೆ ಮಾಡುವುದನ್ನು ಮತ್ತು ಶಿಕ್ಷೆ ನೀಡುವುದನ್ನು ಸಂವಿಧಾನವು ನಿಷೇಧಿಸಿದೆ ಇದನ್ನು ಏನೆಂದು ಕರೆಯುತ್ತಾರೆ ?
ಇಮ್ಮಡಿ ವಿಪತ್ತು.

9. ವ್ಯಕ್ತಿ ಸ್ವಾತಂತ್ರ್ಯದ ಬಹುದೊಡ್ಡ ಚಿಹ್ನೆ ಯಾವುದು ?
ಹೇಬಿಯಸ್ ಕಾರ್ಪಸ್.

10. ಯಾವುದೇ ಒಬ್ಬ ವ್ಯಕ್ತಿಯನ್ನು ಒಂದು ರೀತಿಯ ಅಪಾರದಕ್ಕಾಗಿ, ಒಂದಕ್ಕಿಂತ ಹೆಚ್ಚು ಸಾರಿ ಶಿಕ್ಷಿಸುವಂತಿಲ್ಲ ಎಂಬ ತತ್ವವನ್ನು ಪ್ರತಿಪಾದಿಸುವುದು ಯಾವುದು ?
ನೋ ಡಬಲ್ ಜಿಯೋಪರ್ಡಿ.

11. ಆಸ್ತಿಯ ಹಕ್ಕು ಈಗ ಏನಾಗಿದೆ ?
ಇದು ಒಂದು ಕಾನೂನಿನ ಹಕ್ಕಾಗಿದೆ.

12. ಹೇಬಿಯಸ್ ಕಾರ್ಪಸ್ ರಿಟ್ ಎಂದರೇನು ?
ವ್ಯಕ್ತಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸುವುದು.

13. ಅಸ್ಪೃಶ್ಯತೆಯನ್ನು ನಿರ್ಮೂಲನೆ ಮಾಡಿರುವ ಸಂವಿಧಾನದ ವಿಧಿ ಯಾವುದು ?
ಸಂವಿಧಾನದ 17ನೇ ವಿಧಿ.

14. ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂಬ ಕಲ್ಪನೆಯ ನಡವಳಿ ಮುಂದಿಟ್ಟವರು ಯಾರು ?
ಸ್ವರಾಜ್ ಬಿಲ್.

15. ಸಂವಿಧಾನದ ಪರಿಹಾರೋಪಾಯಗಳು ಯಾವುದಕ್ಕೆ ಸಂಬಂಧಿಸಿದೆ ?
ಮೂಲಭೂತ ಹಕ್ಕುಗಳು.

16. ಯಾರ ವಿರುದ್ಧ ಮೂಲಭೂತ ಹಕ್ಕುಗಳನ್ನು ಜಾರಿಗೊಳಿಸಲು ಬರುವುದಿಲ್ಲ?
ಖಾಸಗಿ ವ್ಯಕ್ತಿಗಳು.

17. ಮೂಲಭೂತ ಹಕ್ಕುಗಳನ್ನು ಜಾರಿಗೊಳಿಸಲು ಸಂವಿಧಾನವು ವಿಶೇಷ ಅಧಿಕಾರ ನೀಡಿರುವುದು ಯಾರಿಗೆ ?
ಸುಪ್ರೀಂ ಕೋರ್ಟ್ ಗೆ.

18. ಬಂಧನಕ್ಕೆ ಒಳಗಾದ ವ್ಯಕ್ತಿಯನ್ನು ಎಷ್ಟು ಗಂಟೆಯ ಒಳಗೆ ನ್ಯಾಯಾಧೀಶರ ಮುಂದೆ ಹಾಜರುಪಡಿಸಬೇಕು ?
24 ಗಂಟೆಗಳು.

19. ಕಾನೂನಿನ ಎದುರು ಸಮಾನತೆ ಅನುಚ್ಛೇದ ಖಾತರಿಪಡಿಸಿರುವುದು ಯಾರಿಗೆ ?
ಎಲ್ಲಾ ವ್ಯಕ್ತಿಗಳಿಗೆ.

20. ಸಂವಿಧಾನದ ಮೂರನೇ ಭಾಗದ ಯಾವುದರ ಉಲ್ಲಂಘನೆ ಆದಾಗ ಸರ್ವೋಚ್ಚ ನ್ಯಾಯಾಲಯದ ನೆರವು ಪಡೆಯಬಹುದು ?
ಮೂಲಭೂತ ಹಕ್ಕುಗಳ ಉಲ್ಲಂಘನೆ.

21. ಮೂಲಭೂತ ಹಕ್ಕುಗಳು ಉಲ್ಲಂಘನೆ ಯಾದರೆ ಈ ಕೆಳಕಂಡ ಯಾರ ಮುಂದೆ ಪ್ರಸ್ತುತಪಡಿಸಬಹುದು ?
ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಎರಡರಲ್ಲೂ.

22. ಅನುಚ್ಛೇದ 30ರ ಅಡಿಯಲ್ಲಿ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಲು ಅವಕಾಶ ನೀಡಿರುವುದು ಯಾರಿಗೆ ?
ಭಾಷಾ ಮತ್ತು ಧಾರ್ಮಿಕ ಅಲ್ಪಸಂಖ್ಯಾತರಿಗೆ.

23. ಸಂವಿಧಾನದ ಮೂಲ ರಚನೆಯನ್ನು ಸಂಸತ್ತು ತಿದ್ದುಪಡಿ ಮಾಡುವ ಅಧಿಕಾರ ಹೊಂದಿಲ್ಲ, ಎಂದು ಸುಪ್ರೀಂ ಕೋರ್ಟ್ ಯಾವ ಪ್ರಕರಣದಲ್ಲಿ ಹೇಳಿದೆ ?
ಕೇಶವಾನಂದ ಭಾರತಿ v/s ಸ್ಟೇಟ್ ಆಫ್ ಕೇರಳ.

24. ಸಂವಿಧಾನದ ಯಾವ ಅನುಚ್ಛೇದವು ಅಸ್ಪೃಶ್ಯತೆಯನ್ನು ರದ್ದುಗೊಳಿಸಲು ಅವಕಾಶ ನೀಡುತ್ತದೆ ?
17

25. ಯಾವ ವಯೋಮಾನದ ಎಲ್ಲ ಮಕ್ಕಳಿಗೆ ಶಿಕ್ಷಣವನ್ನು ಉಚಿತವಾಗಿ ಒದಗಿಸುವುದು ಸರ್ಕಾರದ ಕರ್ತವ್ಯವಾಗಿದೆ ?
6 to 14 ವರ್ಷಗಳು

26. ಅತ್ಯಾಚಾರ ಹಾಗೂ ಕೊಲೆಯ ಅಪರಾಧಕ್ಕಾಗಿ ಜೈಲಿನಲ್ಲಿ ಇರಿಸಲಾದ ವ್ಯಕ್ತಿಯು, ಯಾವ ವಿಧಿಯ ಅಡಿಯಲ್ಲಿ ಸೌಲಭ್ಯಗಳನ್ನು ಪಡೆದುಕೊಳ್ಳಬಹುದು ?
ಸಂವಿಧಾನದ 21ನೇ ವಿಧಿ.

27. “ಸಂವಿಧಾನದ ಹೃದಯ ಮತ್ತು ಆತ್ಮ “ಎಂದು ಯಾವ ವಿಧಿಯನ್ನು ಕರೆಯುತ್ತಾರೆ ?
32ನೇ ವಿಧಿ.

28. ಭಾರತ ಸಂವಿಧಾನದ ಪ್ರಕಾರ ಈ ಕೆಳಗಿನವುಗಳಲ್ಲಿ ಯಾವುದು ಮೂಲಭೂತ ಹಕ್ಕಲ್ಲ ?
ಆಸ್ತಿಯ ಹಕ್ಕು.

29. ಭಾರತ ಸಂವಿಧಾನದ ಯಾವ ಅನುಚ್ಛೇದ “ಜೀವನದ ಹಕ್ಕಿನ” ಬಗ್ಗೆ ತಿಳಿಸುತ್ತದೆ ?
ಆರ್ಟಿಕಲ್ 21.

30. ಕೆಳಗಿನ ರಿಟ್ ಗಳಲ್ಲಿ ಯಾವುದು ಕಾನೂನು ಬಾಕಿ ಬಂಧನದೊಂದಿಗೆ ವಿವರಿಸುತ್ತದೆ ?
ಹೇಬಿಯಸ್ ಕಾರ್ಪಸ್.

31. ಯಾವ ರಿಟ್ನ ಅಕ್ಷರಾಂಶ ಅರ್ಥ ” ನಾವು ಅಜ್ಞೆಪಿಸಿದ್ದೇವೆ ” ಎಂದಾಗಿದೆ ?
ಮ್ಯಾಂಡಮಸ್.

32. ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣದ ಹಕ್ಕು ( RTE) ಭಾರತೀಯ ಯಾವ ವಿಧಿಯಲ್ಲಿ ಸೇರಿಸಲ್ಪಟ್ಟಿದೆ ?
ವಿಧಿ 21 (ಎ)

33. ಈ ಕೆಳಗಿನವುಗಳಲ್ಲಿ ಮೂಲಭೂತ ಹಕ್ಕುಗಳನ್ನು ಸಂರಕ್ಷಿಸುವುದು ಯಾವುದು ?
ನ್ಯಾಯಾಂಗ.

34. ಸಂವಿಧಾನದ ಯಾವ ವಿಧಿಯು 6 ವರ್ಷಕ್ಕಿಂತ ಕೆಳಗಿನ ಮಕ್ಕಳ ಶಿಕ್ಷಣದ ಮಹತ್ವವನ್ನು ತಿಳಿಸುತ್ತದೆ ?
45ನೇ ವಿಧಿ.

35. ಸಂವಿಧಾನದ ಯಾವ ಭಾಗವನ್ನು ಐರ್ಲ್ಯಾಂಡ್ ಸಂವಿಧಾನದಿಂದ ಎರವಲು ಪಡೆಯಲಾಗಿದೆ ?
ರಾಜ್ಯ ನಿರ್ದೇಶಕ ತತ್ವಗಳು.

36. ಭಾರತ ಸಂವಿಧಾನದ ಯಾವ ಭಾಗವೂ ರಾಜ್ಯ ನಿರ್ದೇಶಕ ತತ್ವಗಳನ್ನು ಒಳಗೊಂಡಿದೆ ?
ಭಾಗ 4

37. ರಾಜ್ಯ ನಿರ್ದೇಶಕ ತತ್ವಗಳ ಜಾರಿಯೂ ಹೆಚ್ಚಾಗಿ ಇವರ ಮೇಲೆ ಅವಲಂಬಿಸಿರುತ್ತದೆ ?
ಸರ್ಕಾರಕ್ಕೆ ಲಭ್ಯವಿರುವ ಮೂಲಗಳಿಂದ.

38. ಪಂಚಶೀಲ ತತ್ವಗಳು ಯಾವ ಮೌಲ್ಯವನ್ನು ಆಧರಿಸಿದೆ ?
-: ರಾಜ್ಯ ನಿರ್ದೇಶಕ ತತ್ವಗಳ ಮೌಲ್ಯ

39. ಭಾರತ ಸಂವಿಧಾನದಲ್ಲಿ ಅಂತರಾಷ್ಟ್ರೀಯ ಶಾಂತಿ ಮತ್ತು ಭದ್ರತೆಯ ಉತ್ತೇಜನವು ಇದರಲ್ಲಿ ಒಳಗೊಂಡಿದೆ ?
ರಾಜ್ಯ ನಿರ್ದೇಶಕ ತತ್ವಗಳಿಂದ.

40. ಸಂವಿಧಾನದ ಯಾವ ವಿಭಾಗದಲ್ಲಿ ಕಲ್ಯಾಣ ರಾಜ್ಯದ ಪರಿಕಲ್ಪನೆ ಸಂಬಂಧಿಸಿದೆ ?
ರಾಜ್ಯ ನಿರ್ದೇಶಕ ತತ್ವಗಳು.

41. ನ್ಯಾಯಾಂಗವನ್ನು ಕಾರ್ಯಾಂಗದಿಂದ ಪ್ರತ್ಯೇಕಿಸುವ ಸಂಗತಿ ಸಂವಿಧಾನದಲ್ಲಿ ಎಲ್ಲಿ ಉಲ್ಲೇಖಿತವಾಗಿದೆ ?
ಮಾರ್ಗದರ್ಶಿ ತತ್ವಗಳು.

42. ಭಾರತದ ಪ್ರಜೆಯಾಗಿರುವ ಪ್ರತಿಯೊಬ್ಬ ತಂದೆ ತಾಯಿಗಳು ತಮ್ಮ ಮಗುವಿಗೆ ಶಿಕ್ಷಣದ ಅವಕಾಶವನ್ನು ಒದಗಿಸುವುದಕ್ಕೆ ಏನೆಂದು ಕರೆಯುತ್ತಾರೆ ?
ಮೂಲಭೂತ ಕರ್ತವ್ಯ.

43. ಸಂವಿಧಾನದ ಪ್ರಕಾರ ಈ ಕೆಳಕಂಡ ಯಾವುದು ಮೂಲಭೂತ ಕರ್ತವ್ಯವಲ್ಲ ?
ಕುಟುಂಬವನ್ನು ಪೋಷಿಸುವ ಕರ್ತವ್ಯ.

44. ಈ ಕೆಳಗಿನವುಗಳಲ್ಲಿ ಯಾವುದು ಅಪರಾಧವಾಗಿದೆ ?
ಮೂಲಭೂತ ಕರ್ತವ್ಯಗಳನ್ನು ಪಾಲಿಸದಿರುವುದು .

45. ಭಾರತದ ಸಂವಿಧಾನದಲ್ಲಿ ಮೂಲಭೂತ ಕರ್ತವ್ಯಗಳನ್ನು ಈ ಕೆಳಕಂಡ ಯಾವ ತಿದ್ದುಪಡಿಯಿಂದ ಜಾರಿಗೆ ತರಲಾಗಿದೆ ?
42ನೇ ತಿದ್ದುಪಡಿ.

46. ಮೂಲಭೂತ ಕರ್ತವ್ಯಗಳನ್ನು ಸಂವಿಧಾನದಲ್ಲಿ ಯಾವ ವರ್ಷ ಅಳವಡಿಸಿಕೊಳ್ಳಲಾಯಿತು ?
1976 ರಲ್ಲಿ

47. ಮೂಲಭೂತ ಕರ್ತವ್ಯಗಳನ್ನು ಯಾವ ಅನುಚ್ಛೇದದಲ್ಲಿ ಸೇರಿಸಲಾಗಿದೆ ?
ಅನುಚ್ಛೇದ 51A

48. ಭಾರತದ ಪ್ರಥಮ ಪ್ರಜೆ ಯಾರು?
ಭಾರತದ ರಾಷ್ಟ್ರಪತಿಗಳು

49. ರಾಷ್ಟ್ರಪತಿ ಭವನ ಎಲ್ಲಿದೆ ?
ನವದೆಹಲಿ.

50. ರಾಷ್ಟ್ರಪತಿ ನಿವಾಸ ಎಲ್ಲಿದೆ ?
ಶೀಮ್ಲಾ (ಹಿಮಾಚಲ ಪ್ರದೇಶ)

Exit mobile version