Site icon Compitative Exams MCQ Questions and Answers

Top 30 (ಭಾರತದ ಇತಿಹಾಸ) important easy Indian History one liner questions series in kannada 04 PC and PSI repeated questions and answers for upcoming exams VAO PDO SSC MTS SSC CHSL and ssc CGL exams

Contents show
1 ಭಾರತದ ಇತಿಹಾಸ – 05 : ಈ ಹಿಂದೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಲಾದ ಪುನರಾವರ್ತಿತ ಪ್ರಶ್ನೋತ್ತರಗಳು.



ಭಾರತದ ಇತಿಹಾಸ – 05 : ಈ ಹಿಂದೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಲಾದ ಪುನರಾವರ್ತಿತ ಪ್ರಶ್ನೋತ್ತರಗಳು.

1. “ಪಾವರ್ಟಿ ಅಂಡ್ ಅನ್ ಬ್ರಿಟಿಷ್ ರೂಲ್ ಇನ್ ಇಂಡಿಯಾ” ಈ ಪುಸ್ತಕವನ್ನು ರಚಿಸಿದವರು ಯಾರು ?

– ದಾದಾಬಾಯಿ ನವರೋಜಿ 

2. ಪ್ರಸಿದ್ಧ “ಸ್ವರಾಜಿಸ್ಟ್ ದಳವು” ಯಾವ ಚಳುವಳಿಯ ವೈಫಲ್ಯದ ನಂತರ ಸ್ಥಾಪನೆಗೊಂಡಿತು ?

– ಅಸಹಕಾರ ಚಳುವಳಿ 

3. “ಸಂಗಮ” ಸಾಹಿತ್ಯ ಕೇಂದ್ರ ಯಾವುದಾಗಿತ್ತು ?

– ಮಧುರೈ 

4. ರೈತವಾರಿ ಪದ್ಧತಿಯನ್ನು ಯಾರು ಜಾರಿಗೆ ತಂದರು ?

– ಸರ್ ಥಾಮಸ್ ಮನ್ರೋ 

5. “ಚಾಲುಕ್ಯ ಸೈನ್ಯವು” ಯಾವ ಹೆಸರಿನಿಂದ ಗುರುತಿಸಿಕೊಂಡಿತ್ತು ?

– ಕರ್ನಾಟ ಬಲ 

6. ಹೊಯ್ಸಳರ ಕಾಲದ ಶೈಕ್ಷಣಿಕ ಕಲಿಕಾ ಶಾಲೆಗಳನ್ನು ಏನೆಂದು ಕರೆಯುತ್ತಿದ್ದರು ?

– ಘಟಿ ಕಾಲಯಗಳು 

7. ಗಾಂಧಿ ಇರ್ವಿನ್ ಒಪ್ಪಂದಕ್ಕೆ ಯಾವಾಗ ಸಹಿ ಹಾಕಲಾಯಿತು ?

– 1931 ರಲ್ಲಿ 

8. ಮೌರ್ಯರ ಕಾಲದ ಆಡಳಿತ ಭಾಷೆ ಯಾವುದು ?

– ಪ್ರಾಕೃತ್ 

9. ಪ್ರಪಂಚದಲ್ಲಿಯೇ ಪ್ರಸಿದ್ಧವಾದ ಖಜುರಾಹೋ ದೇವಾಲಯವನ್ನು ಕಟ್ಟಿಸಿದವರು ಯಾರು ?

– ಚಂದೆeಲರು



10. ಹರ್ಷವರ್ಧನನ ಇತಿಹಾಸವನ್ನು ತಿಳಿಸುವ “ಹರ್ಷ ಚರಿತೆ” ಎಂಬ ಗ್ರಂಥವನ್ನು ಬರೆದವರು ಯಾರು ?

– ಬಾಣಭಟ್ಟ 

11. ಬಿಜಾಪುರದ ಗೋಳಗುಮ್ಮಟದ ನಿರ್ಮಾಪಕರು ಯಾರು ?

– ಮಹಮ್ಮದ್ ಆದಿಲ್ ಷಾ 

12. ಹುಮಾಯುನ್ ನಾಮ ಪುಸ್ತಕದ ಕರ್ತೃ ಯಾರು ?

– ಗುಲ್ಬದನ್ ಬೇಗಂ 

13. ಅನುಭವ ಮಂಟಪದಲ್ಲಿ ನಡೆಯುತ್ತಿದ್ದ ಧಾರ್ಮಿಕ ಪ್ರವಚನಗಳಲ್ಲಿ ಅಧ್ಯಕ್ಷತೆ ವಹಿಸುತ್ತಿದ್ದವರು ಯಾರು ?

– ಅಲ್ಲಮಪ್ರಭು 

14. ಸಮುದ್ರ ಗುಪ್ತನ ಆಸ್ಥಾನದ ಕವಿ ಯಾರು ?

– ಹರಿಸೇನ

15. “ವರಾಹವು” ಯಾವ ಮನೆತನದ ರಾಜಲಾಂತನವಾಗಿತ್ತು ?

– ಚಾಲುಕ್ಯ 

16. ಭಾರತದಲ್ಲಿ “ದ್ವಿ ಪ್ರಭುತ್ವವು” ಯಾವುದರಲ್ಲಿ ಮೊದಲಿಗೆ ಪರಿಚಯಿಸಲ್ಪಟ್ಟಿತು ?

– ಮಾಂಟ್ ಫೋರ್ಡ್ ಸುಧಾರಣೆಗಳಲ್ಲಿ 

17. ಬ್ರಿಟಿಷ್ – ಭಾರತದ ಕೊನೆಯ ಗವರ್ನರ್ ಜನರಲ್ ಯಾರು ?

– ಲಾರ್ಡ್ ಮೌಂಟ್ ಬ್ಯಾಟನ್ 

18. ಆಧುನಿಕ ಅಂಚೆ ವ್ಯವಸ್ಥೆಯ ಅಡಿಪಾಯವನ್ನು ಹಾಕಿದವನು ಯಾರು ?

– ಲಾರ್ಡ್ ಡಾಲ್ ಹೌಸಿ 



19. “ಪ್ರಥಮ ವೇದ” ಯಾವುದು ?

– ಋಗ್ವೇದ 

20. ರಾಜಶ್ರೀ ಯಾರ ಸಹೋದರಿ ?

– ಹರ್ಷವರ್ಧನನ 

21.” ತ್ರಿಪಿಟಕ ಗಳು” ಯಾರ ಪವಿತ್ರ ಗ್ರಂಥಗಳು ?

– ಬೌದ್ಧರ ಪವಿತ್ರ ಗ್ರಂಥ 

22. ಫ್ರಾನ್ಸ್ ಮಹಾ ಕ್ರಾಂತಿ ಜರುಗಿದ ವರ್ಷ ಯಾವುದು ?

– 1789

23. ಕೈಲಾಸನಾಥ ದೇವಾಲಯವು ಯಾರಿಂದ ನಿರ್ಮಿತವಾಯಿತು ?

– ಒಂದನೆಯ ಕೃಷ್ಣ 

24. ಎರಡನೇ ಆಂಗ್ಲೋ-ಮೈಸೂರು ಯುದ್ಧವು ಯಾವ ಒಪ್ಪಂದದ ಮೂಲಕ ಕೊನೆಗೊಂಡಿತು ?

– ಮಂಗಳೂರು ಒಪ್ಪಂದ 

25. ಸಿಂಧೂ ನಾಗರಿಕತೆಯ ಜನರ ಮುಖ್ಯ ಬಂದರು ಯಾವುದು ?

– ಲೋಥಲ್ 

26. ಅಕ್ಬರನ ಸಮಾಧಿಯು ಎಲ್ಲಿದೆ ?

– ಸಿಕಂದ್ರಾ 

27. ಪ್ರಸಿದ್ಧ ಜೈನ ಪಂಡಿತನಾದ ಜೀನ ಸೇನನು ಯಾವ ದೊರೆಯ ಆಸ್ಥಾನದಲ್ಲಿದ್ದನು ?

– ಅಮೋಘ ವರ್ಷ 

28. “ನೊಳಂಬವಾಡಿಗೊಂಡ ಮತ್ತು ತಲಕಾಡುಕೊಂಡ” ಈ ವಿಶೇಷಗಳು ಯಾರ ನಾಣ್ಯದ ಮೇಲೆ ಕಂಡುಬಂದಿವೆ ?

– ಬಿಟ್ಟಿದೇವ 

29. ಯಾವ ಪ್ರಾಂತ್ಯದ ಮೇಲೆ ವಿಜಯವನ್ನು ಗಳಿಸಿದ ನೆನಪಿಗಾಗಿ ಅಕ್ಬರನು ಸಿಕ್ರಿಯಲ್ಲಿ “ಬುಲಂದ್ ದರ್ವಾಜ”ವನ್ನು ನಿರ್ಮಿಸಿದನು ?

– ಗುಜರಾತ್ ಪ್ರಾಂತ್ಯ 

30. ವಿಜಯನಗರ ಆಳ್ವಿಕೆಯಡಿ ಜಮೀನುದಾರರು ಮತ್ತು ಗೇಣಿದಾರರ ನಡುವೆ ಇದ್ದ ಪಾಲುದಾರಿಕೆ ವ್ಯವಸ್ಥೆಯನ್ನು ಏನೆಂದು ಕರೆಯುವರು ?

– ವರಮ್.

Exit mobile version